ಪ್ರವಾಸ ಕಥನಕ್ಕೆ ಪೂರಕ ಮಾಹಿತಿ......
ಕರ್ನಾಟಕ ಇಡೀ ಭಾರತೀಯ ವಾಸ್ತುಶಿಲ್ಪ ಶೈಲಿಗಳ ಸರ್ವ ಪ್ರಕಾರಗಳಿಗೆ ಒಂದು ಮುಕ್ತ
ಪ್ರಯೋಗಾಲಯದಂತಿದೆ. ಅತ್ಯಂತ ಪ್ರಾಚೀನ ಆದಿಮಾನವ ಕಾಲದಿಂದ ಹಿಡಿದು, ತುಂಬ ಆಧು
ನಿಕವಾದ ಮಾನವನ ನಿರ್ಮಾಣ ಕೌಶಲಗಳನ್ನು ಇಲ್ಲಿ ಕಾಣಬಹುದು. ಇತಿಹಾಸದ ದೃಷಿ
ಯಿಂದ ಮಹತ್ವದ್ದವು ಎನಿಸಿರುವ ಕೆಲವು ವಾಸ್ತುನಿರ್ಮಾಣಗಳನ್ನು ಈ ಸಂಚಿಕೆಯಲ್ಲಿ ಕೊಡ
ಲಾಗಿದೆ.
ಹೀಗೆ ಮಾಡಿ,
ನೀವೀಗ ಈ ಚಿತ್ರಗಳನ್ನು ನೋಡಿರಿ; ಆನಂದಿಸಿರಿ. ಅನಂತರ, ಕರ್ನಾಟಕ/ಭಾರತ ನಕ್ಷೆಯನ್ನು ತೆಗೆದುಕೊಳ್ಳಿ. ನಿಮ್ಮ ಊರಿನಿಂದ, ಇಲ್ಲಿನ ಸ್ಥಳಗಳು ಎಷ್ಟು ದೂರದಲ್ಲಿವೆ? ಯಾವ ದಿಕ್ಕಿನಲಿವೆ? ಮತ್ತು ಅಲ್ಲಿಗೆ ಹೋಗಲು ಯಾವ ಸಾರಿಗೆ ವ್ಯವಸ್ಥೆಯಿದೆ? ಎಂಬುದನ್ನು ಕಂಡು ಹಿಡಿದು, ನಿಮ್ಮ ಗೆಳೆಯರು, ಪಾಲಕರು ಮತ್ತು ಶಿಕ್ಷಕರೊಂದಿಗೆ ಚರ್ಚಿಸಿರಿ.
|

ಕರ್ನಾಟಕದ ಅತ್ಯಂತ ಹಳೆಯ ನಿರ್ಮಿತಿಗಳು ಎಂದರೆ ಈ ಬೃಹತ್ ಶಿಲಾ ಸಮಾಧಿಗಳು. 'ಮೋರೇರ ಮನೆಗಳು' ಎಂದು ಇವುಗಳನ್ನು ಸ್ಥಳೀಯರು ಕರೆಯುತ್ತಾರೆ. ಕಾಲದ ದೃಷ್ಟಿಯಿಂದ ಇವು ಕ್ರಿ.ಶ.ಆರಂಭದ ಕಾಲದ್ದವು ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಗಂಗಾವತಿಯಿಂದ ಹತ್ತಾರು ಕಿಲೋಮೀಟರ್ ದೂರ ಹೋದ ಬಳಿಕ ಬೆಟ್ಟವನ್ನು ಹತ್ತಬೇಕು. ಹತ್ತಿ ಹತ್ತಿ ಹೋಗುತ್ತಿರಬೇಕಾದರೆ ಯಾವುದೋ ಒಂದು ಕ್ಷಣದಲ್ಲಿ ಈ ಸಮಾಧಿಗಳು ( ಒಂದಲ್ಲ ಎರಡಲ್ಲ ನೂರಾರು!) ಪ್ರತ್ಯಕ್ಷವಾಗುತ್ತವೆ.
|
|

ಕ್ರಿ.ಶ.ಪೂರ್ವ ೩ನೇ ಶತಮಾನದಲ್ಲಿ ಕರ್ನಾಟಕವು ಮೌರ್ಯ ಸಾಮ್ರಾಟರ ಸಂಪರ್ಕಕ್ಕೆ ಬಂದಿತ್ತು. ಹೀಗಾಗಿ, ಅಶೋಕನ ಕಾಲದ ಶಾಸನಗಳು ಇಲ್ಲಿ ಕಂಡುಬರುತ್ತವೆ. ಮೇಲಿರುವುದು ಕಲಬುರ್ಗಿ ಜಿಲ್ಲೆಯ ಸನ್ನತಿಯಲ್ಲಿನ ಶಾಸನ.
|

ಮೇಲಿರುವುದು ಬೌದ್ಧ ಸ್ತೂಪದ ಅವಶೇಷ. ಇದೂ ಕೂಡ ಸನ್ನತಿಯಲ್ಲಿದೆ. ಈಗ ಈ ಸ್ತೂಪದಲ್ಲಿ ದೊರೆತಿರುವ ಶಿಲ್ಪಗಳನ್ನು ಸಂರಕ್ಷಿಸುವ ಕಾರ್ಯ ಆರಂಭವಾಗಿದೆ.
|
|

|
|
ಶಾತವಾಹನರ ನಂತರ ಕರ್ನಾಟಕದ ಬಹುಭಾಗವು ಕದಂಬ ಆಳ್ವಿಕೆಗೆ ಒಳಪಟ್ಟಿತ್ತು. ಅವರ ರಾಜಧಾನಿಯಲ್ಲಿನ ಮಧುಕೇಶ್ವರ ದೇವಾಲಯ ಮತ್ತು ಅದರ ಪ್ರಾಕಾರಮಂಟಪದ ಎದುರಿನ ಸರ್ವಾಲಂಕೃತ ಆನೆಯನ್ನು (ಕೆಳಗೆ) ಇಲ್ಲಿ ಕಾಣಬಹುದು.

|
|

ಕದಂಬರ ನಂತರ ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲಿ ಮಹಾಸಾಮ್ರಾಜ್ಯ ಕಟ್ಟಿ ಮೆರೆದವರು ಬಾದಾಮಿ ಚಾಲುಕ್ಯರು. ಅವರ ಮೊದಲ ರಾಜಧಾನಿ ಐಹೊಳೆ. ಅಲ್ಲಿನ ಮೇಗುತಿ ದೇವಾಲಯವನ್ನು ನೀವಿಲ್ಲಿ ನೋಡುತ್ತಿದ್ದೀರಿ. ಅನಂತರ ಅವರು ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು. ಅಲ್ಲಿನ ಮೇಣಬಸದಿಯೊಂದರಲ್ಲಿ ಕೆತ್ತನೆಯುಳ್ಳ ಕಂಬಗಳನ್ನು ಇಲ್ಲಿ (ಕೆಳಗೆ) ನೋಡಬಹುದು.
|
|

|